ಚಿಕ್ಕನಾಯಕನ ಹಳ್ಳಿ: ತಾಲೂಕಿನ ಗೋಡೆಕೆರೆಯಲ್ಲಿ ಶುಕ್ರವಾರ ಸಂಜೆ ಸುರಿದ ಬಾರಿ ಮಳೆ ಗಾಳಿ ಹಲವಾರು ಅವಾಂತರ ಸೃಷ್ಟಿ ಮಾಡಿದ್ದು ತೆಂಗು, ಅಡಿಕೆ ಮರಗಳು ಹಾಗು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಗೋಡೆಕೆರೆ ಗೊಲ್ಲರಹಟ್ಟಿಯ ಸಿ.ಶಿವಣ್ಣ ಎಂಬುವವರ ಸೊಂಡೆನಹಳ್ಳಿ ಸರ್ವೆ ನಂ.62/2 ತೋಟದಲ್ಲಿ ಸುಮಾರು 60 ರಿಂದ 70 ಅಡಿಕೆ ಮರಗಳು, 50 ಕ್ಕೂ ಹೆಚ್ಚು ತೆಂಗಿನ ಮರಗಳು ವಿಪರಿತ ಗಾಳಿಗೆ ನೆಲಕ್ಕುರುಳಿವೆ, ಜೆ.ಸಿ.ಪುರ ಹಾಗು ಗೋಡೆಕೆರೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಮೇರೆ ಮರಗಳು ಬಿದ್ದು ಹಲವಾರು ವಿದ್ಯುತ್ ಕಂಬಗಳು ಮುರಿದು ಹೋಗಿವೆ.
ಮಕ್ಕಳಂತೆ ಸಾಕಿದ್ದ ಅಡಿಕೆ ಮರಗಳು ವಿಪರೀತ ಗಾಳಿಗೆ ಕ್ಷಣ ಮಾತ್ರದಲ್ಲಿ ನೆಲಕ್ಕುರುಳಿವೆ, ಸುಮಾರು 70 ಸಲಿಗೆ ಬಂದಿದ್ದ ಅಡಿಕೆ ಮರಗಳು ಪ್ರಕೃತಯ ವಿಕೋಪಕ್ಕೆ ಬಿದ್ದು ಹೋಗಿವೆ, ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಮರಗಳುನ್ನು ಕಳೆದುಕೊಂಡಿರುವುದರಿಂದ ಬಾರಿ ನಷ್ಟವಾಗಿದೆ, ದಯಮಾಡಿ ಸರ್ಕಾರ ಅನುಕಂಪದಿಂದ ನಮಗೆ ಪರಿಹಾರ ನೀಡಬೇಕು ಅಡಿಕೆ ಮರಗಳನ್ನು ಕಳೆದುಕೊಂಡ ರೈತ ಶಿವಣ್ಣ.ಸಿ. ಮನವಿ ಮಾಡಿದ್ದಾರೆ.