ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಕಲ್ಲಯ್ಯನ ಪಾಳ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ಓರ್ವ ವ್ಯಕ್ತಿ ಹಾಗೂ ಎರಡು ಸೀಮೆ ಹಸು ಮೃತ ಪಟ್ಟಿರುವ ಘಟನೆ ನಡೆದಿದೆ.
ಕಲ್ಲಯ್ಯನಪಾಳ್ಯದ ಮಧ್ಯಮ ವರ್ಗದ ನಿವಾಸಿ ಯೋಗೀಶ್ (50) ಮೃತ ದುರ್ದೈವಿ, ಪ್ರತಿದಿನದಂತೆ ತನ್ನ ಮನೆಯ 5 ರಾಸು ಹಸುಗಳನ್ನು ಸಮೀಪವಿರುವ ತೋಟದಲ್ಲಿ ಮೇಯಿಸಲು ಬಂದಾಗ ಮಂಗಳವಾರ ಬೆಳಗ್ಗೆ 8.30 ರ ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಮೃತ ಸೀಮೆ ಹಸುಗಳು ಸುಮಾರು 70 ರಿಂದ 80 ಸಾವಿರ ರೂಪಾಯಿ ಮೌಲ್ಯವುಳ್ಳ ವು ಆಗಿದ್ದು ಹೈನುಗಾರಿಕೆ ಹಾಗೂ ಕೃಷಿಯಿಂದ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ನಾಗರಾಜು, ನೊಣವಿನಕೆರೆ ಪಿಎಸ್ಐ ಬಸವರಾಜು, ಬೆಸ್ಕಾಂ ಎಇ ಮನೋಹರ್ ಭೇಟಿ ನೀಡಿದ್ದಾರೆ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ, ಇತ್ತೀಚೆಗೆ ಸಿಲಿಂಡರ್ ಸ್ಫೋಟಗೊಂಡು ಮೂರೂ ಮನೆಗಳು ಭಸ್ಮವಾಗಿದ್ದವು, ಈ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ವಿದ್ಯುತ್ ಅವಘಡ ಸಂಭವಿಸಿದ್ದು ಊರಿನ ಜನರಲ್ಲಿ ಆತಂಕ ಉಂಟು ಮಾಡಿದೆ.
ಕರೆಂಟ್ ಶಾಕ್- ವ್ಯಕ್ತಿ, 2 ಹಸು ಬಲಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು