ಗಾಂಜಾ ಸಂಗ್ರಹ- 11 ವಿದ್ಯಾರ್ಥಿಗಳ ಬಂಧನ

ಮಂಗಳೂರು: ಗಾಂಜಾ ಸಂಗ್ರಹಿಸಿದ ಮತ್ತು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಕೇರಳದ ಎರಡನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ 11 ವಿದ್ಯಾರ್ಥಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ, ಪಿಎಸ್ ಐ ಶೀತಲ್ ಅಲಗೂರ್ ನೇತತ್ವದ ಮಂಗಳೂರು ದಕ್ಷಿಣ ಪೊಲೀಸರ ತಂಡ ಗುರುವಾರ ಸಂಜೆ ಅತ್ತಾವರದ ಕಪ್ರಿಗುಡ್ಡೆ ಮಸೀದಿ ಬಳಿಯ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿತು. ಎಲ್ಲ ಆರೋಪಿಗಳು ಕಾಲೇಜು ಅಧ್ಯಯನಕ್ಕಾಗಿ ನಗರದಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ … Read more

ಲಂಚಕ್ಕೆ ಬೇಡಿಕೆ- ಇಬ್ಬರು ಇನ್ಸ್ ಪೆಕ್ಟರ್ ಅಮಾನತು

ಬೆಂಗಳೂರು: ಲಂಚಕ್ಕೆ ಬೇಡಿಕೆ ಹಾಗೂ ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಗಳ ಸಹಿತ ಐವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಕೋರಮಂಗಲ ಠಾಣೆಯ ಇನ್ಸ್ ಪೆಕ್ಟರ್ ಲೂಯಿರಾಮ ರೆಡ್ಡಿ ಹಾಗೂ ಹಲಸೂರು ಗೇಟ್ ಠಾಣೆಯ ಇನ್ಸ್ ಪೆಕ್ಟರ್ ಹನುಮಂತ ಭಜಂತ್ರಿ ಸೇರಿದಂತೆ ಐವರು ಸಿಬ್ಬಂದಿ ಅಮಾನತುಗೊಳಿಸಲಾಗಿದೆ. ಚಿನ್ನದ ಉದ್ಯಮಿಯೊಬ್ಬರಿಂದ 10 ಲಕ್ಷ ರೂಪಾಯಿ ವಸೂಲಿಗೆ ಯತ್ನಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು … Read more

ಕ್ರಿಕೆಟ್ ಕೋಚ್ ನಿಂದ ಲೈಂಗಿಕ ಕಿರುಕುಳ ಆರೋಪ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನಾಗಿರುವ ಮ್ಯಾಥಿವ್ ಎಂಬ ವ್ಯಕ್ತಿಯ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು, ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದಲ್ಲದೇ ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನು ಸಹ ಸೆರೆಹಿಡಿದಿದ್ದಾನೆ ಎಂದು ದೂರಿದ್ದಾಳೆ. ಒಟ್ಟು 2500 ವಿಡಿಯೋಗಳು ಆತನ ಬಳಿಯಿವೆ ಎಂಬ ಆರೋಪವಿದೆ. ಸಂತ್ರಸ್ತೆಯ ದೂರಿನ … Read more

ದಬ್ಬೇಘಟ್ಟ ರಸ್ತೆ ವೃತ್ತದಲ್ಲಿ ಬಸ್, ದ್ವಿಚಕ್ರ ನಡುವೆ ಡಿಕ್ಕಿ

ತುರುವೇಕೆರೆ: ಇಲ್ಲಿಯ ದಬ್ಬೇಘಟ್ಟ ರಸ್ತೆಯ ವೃತ್ತದಲ್ಲಿ ಮತ್ತೊಂದು ಅಪಘಾತವಾಗಿದೆ, ಕೆಎಸ್ ಆರ್ ಟಿ ಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಆದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಈರ್ವರಿಗೂ ತೀವ್ರ ಪೆಟ್ಟು ಬಿದ್ದು ಅವರು ಜೀವನ್ಮರಣದ ಹೋರಾಟ ನಡೆಸಿದ್ದಾರೆ. ದಬ್ಬೇಘಟ್ಟ ರಸ್ತೆ ಮೊದಲೇ ಕಿರಿದಾಗಿದೆ, ಎರಡು ವಾಹನಗಳು ಓಡಾಡಲು ಅಸಾಧ್ಯವಾಗಿದೆ, ಅಲ್ಲದೇ ರಸ್ತೆಯ ಅಕ್ಕಪಕ್ಕ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿರುತ್ತಾರೆ, ರಸ್ತೆ ಕಾಣದಂತೆ ಫ್ಲೆಕ್ಸ್ ಗಳ ಹಾವಳಿ ಸಹ ಇದೆ, ಪಾದಚಾರಿಗಳೆಂದು ಇರುವ ರಸ್ತೆಯನ್ನು ಬೀದಿಬದಿ ವ್ಯಾಪಾರಿಗಳೇ … Read more

19 ವರ್ಷದ ಯುವಕನ ಮದುವೆಯಾದ ಯುವತಿ ಯುವತಿಯ ವಿರುದ್ಧ ಕೇಸ್ ದಾಖಲು

ಬೆಂಗಳೂರು: ರಾಜ್ಯದಲ್ಲೊಂದು ಅಪರೂಪದ ಮದುವೆ ಎನ್ನುವಂತೆ 19 ವರ್ಷದ ಯುವಕನನ್ನು ಯುವತಿಯೊಬ್ಬಳು ಮದುವೆಯಾಗಿದ್ದಳು. ಮನೆಯವರ ವಿರೋಧದ ನಡುವೆಯೂ ಈ ವಿವಾಹ ನಡೆದಿತ್ತು. ಆದರೇ ಇದೀಗ 19 ವರ್ಷದ ಯುವಕನನ್ನು ಬಾಲ್ಯ ವಿವಾಹವಾದಂತ ಯುವತಿಯ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಲ್ಲಿ ಪರಸ್ಪರ ಪ್ರೀತಿಸುತ್ತಿದ್ದ 19 ವರ್ಷದ ಸೌಮ್ಯ ಹಾಗೂ 19 ವರ್ಷದ ಯುವಕ ವಿವಾಹವಾಗಿದ್ದಾರೆ. ಇಬ್ಬರ ಮದುವೆಗೆ ಯುವತಿ ಸೌಮ್ಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದನ್ನು ತೆಕ್ಕಿಸದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. … Read more

ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಐವರು ಉಪನ್ಯಾಸಕರ ವಿರುದ್ಧ ಎಫ್ ಐಆರ್

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಿವಿಯ ಐವರು ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ. ಸಂತ್ರಸ್ತ ಅತಿಥಿ ಉಪನ್ಯಾಸಕಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ವಿವಿಯ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಹಾಗೂ ಶಿವರಾಮ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣದ ವ್ಯಾಪ್ತಿ ರಾಮನಗರಕ್ಕೆ ಬರುವ ಹಿನ್ನೆಲೆ ರಾಮನಗರ ಠಾಣೆಗೆ ಎಫ್ ಐಆರ್ ವರ್ಗಾಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. … Read more

ಅಮೀಬಾ ಸೋಂಕಿಗೆ 19 ಮಂದಿ ಬಲಿ

ಕೇರಳ: ನಿಗೂಢವಾಗಿ ವ್ಯಾಪಿಸುತ್ತಿರುವ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಈ ವರೆಗೂ 19 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮರಣ ಪ್ರಮಾಣ ಹೊಂದಿರುವ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳಲ್ಲಿ ಹೆಚ್ಚಳವಾದ ನಂತರ ಕೇರಳ ಆರೋಗ್ಯ ಅಧಿಕಾರಿಗಳು ಜಾಗರೂಕರಾಗಿದ್ದಾರೆ. ಈ ಸೋಂಕು ಸಾಮಾನ್ಯವಾಗಿ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲ್ಪಡುವ ನೇಗ್ಲೇರಿಯಾ ಫೌಲೆರಿಯಿಂದ ಉಂಟಾಗುತ್ತದೆ. ಈ ವರ್ಷ, ಕೇರಳದಲ್ಲಿ 61 ದೃಢಪಡಿಸಿದ ಪಿಎಎಂ ಪ್ರಕರಣಗಳು ಮತ್ತು 19 ಸಾವುಗಳು ದಾಖಲಾಗಿವೆ. ಈ ಸಾವುಗಳಲ್ಲಿ ಹಲವು ಕಳೆದ ಕೆಲವು … Read more

3 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

ಮೈಸೂರು: ನಗರದ ಪೊಲೀಸ್ ಠಾಣೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಅಮಾನತ್ತುಪಡಿಸಿಕೊಂಡಿದ್ದ 13 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಲಾಯಿತು. ಡ್ರಗ್ ಡಿಸ್ಪೋಸಲ್ ಕಮಿಟಿಯ ಸಮ್ಮುಖದಲ್ಲಿ ಮೈಸೂರು ಜಿಲ್ಲೆ ಜಯಪುರ ಹೋಬಳಿಯ ಗುಜ್ಜೆಗೌಡನಪುರದಲ್ಲಿ ದಹನಕಾರಕ ಪ್ಲಾಂಟ್ ನಲ್ಲಿ ಪರಿಸರ ಅಧಿಕಾರಿ ಹಾಗೂ ಪಂಚಾಯ್ತಿದಾರರ ಸಮಕ್ಷಮದಲಲಿ ಪರಿಸರ ಮಾಲಿನ್ಯವಾಗದಂತೆ ನಾಶಪಡಿಸಲಾಯಿತು. ಮೈಸೂರು ನಗರದ ಎನ್ಡಿಪಿಎಸ್ ಕಾಯ್ದೆಯ 23 ಪ್ರಕರಣಗಳಲ್ಲಿ ಒಟ್ಟು 43ಕೆ.ಜಿ 308ಗ್ರಾಂ ಗಾಂಜಾ, 1 ಪ್ರಕರಣದಲ್ಲಿ 3ಗ್ರಾಂ 75 ಮಿ.ಗ್ರಾಂ ಮಾದಕ ಪದಾರ್ಥಗಳನ್ನು ನಾಶಪಡಿಸಲಾಗಿದೆ. ಇವುಗಳ ಅಂದಾಜು ಮೌಲ್ಯ 13,15,000 … Read more

ಡ್ರಗ್ ಪೆಡ್ಲರ್ಸ್ ಜೊತೆ ಸ್ನೇಹ ಬೆಳೆಸಿ ಪಾರ್ಟಿ ಇನ್ಸ್ ಪೆಕ್ಟರ್, 10 ಪೊಲೀಸರ ಅಮಾನತು

ಬೆಂಗಳೂರು: ಡ್ರಗ್ ಪೆಡ್ಲರ್ಸ್ ಜೊತೆ ಸ್ನೇಹ ಬೆಳೆಸಿ ಪಾರ್ಟಿ ಮಾಡಲಾಗಿದೆ ಎಂಬ ಆರೋಪದ ಮೇಲೆ ಚಾಮರಾಜಪೇಟೆ ಠಾಣೆ ಇನ್ಸ್ ಪೆಕ್ಟರ್ ಹಾಗೂ 10 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಚಾಮರಾಜ ಪೇಟೆಯ 6 ಮಂದಿ ಪೊಲೀಸರು ಹಾಗೂ ಜೆ.ಜೆ.ನಗರದ 4 ಮಂದಿ ಪೊಲೀಸರು ಸಸ್ಪೆಂಡ್ ಆಗಿದ್ದಾರೆ. ಚಾಮರಾಜ ಪೇಟೆ ಠಾಣೆ ಇನ್ಸ್ ಪೆಕ್ಟರ್ ಮಂಜಣ್ಣ ಅವರನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಉಳಿದ ಸಿಬ್ಬಂದಿಯನ್ನು ಡಿಸಿಪಿ ಗಿರೀಶ್ ಅಮಾನತುಗೊಳಿಸಿದ್ದಾರೆ. ಹೆಡ್ ಕಾನ್ಸ್ … Read more

ಕಾಮಾಕ್ಷಿಪಾಳ್ಯದಲ್ಲಿ ಭೀಕರ ಅಪಘಾತ- ಮೂವರ ಸಾವು

ಬೆಂಗಳೂರು: ಇಲ್ಲಿನ ಕಾಮಾಕ್ಷಿಪಾಳ್ಯದಲ್ಲಿ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತಪಟ್ಟವರನ್ನು ಯೇಸು, ಜೆನಿಫರ್ ಹಾಗೂ ಓರ್ವ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಚಾಲಕನ ಹೆಸರು ಇನ್ನೂ ತಿಳಿದುಬಂದಿಲ್ಲ. ಮಾಹಿತಿಯ ಪ್ರಕಾರ, ಕಂಟೇನರ್ ಲಾರಿಯ ಸ್ಟೀರಿಂಗ್ ಕಟ್ ಆಗಿದ್ದರಿಂದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಮೊದಲು ಆಟೋಗೆ ಡಿಕ್ಕಿ ಹೊಡೆದ ಬಳಿಕ ಲಾರಿ, ಆಟೋ ಸಮೇತ ನಿರ್ಮಾಣ ಹಂತದ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದ … Read more