
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಅಪರಾಧಿ, ಶಾಸಕ ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿನ್ನೆ ಇಡೀ ರಾತ್ರಿ ನಿದ್ದೆ ಮಾಡಿಲ್ಲ ಎನ್ನಲಾಗಿದೆ. ತಡರಾತ್ರಿ ವೇಳೆಗೆ ಅಪರಾಧಿ ಕುಲಕರ್ಣಿ ಜೈಲುಪಾಲಾದರು. ಸೆಲ್ ಒಳಗೆ ಹೋಗುತ್ತಿದ್ದಂತೆ ಮತ್ತೆ ಕಣ್ಣೀರು ಹಾಕಿದರು. ಇಲ್ಲಿವರೆಗೂ ಕುಲಕರ್ಣಿ ಊಟ ಮಾಡಿಲ್ಲ ಎನ್ನಲಾಗಿದೆ. ಜೈಲಾಧಿಕಾರಿಗಳು ಎಲ್ಲರಿಗೂ ಸಿಟಿಪಿ ನಂಬರ್ ಅನ್ನು ನೀಡಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಸೆಲ್ ನಲ್ಲಿರಿಸಿದ್ದಾರೆ.
ನಿದ್ದೆ ಇಲ್ಲದೆ ಕಣ್ಣೀರಿಟ್ಟ ವಿನಯ್







