ಸಿಡಿಲು ಬಡಿದು ರೈತ ಸಾವು

ಹಾವೇರಿ: ಸಿಡಿಲು ಬಡಿದು ಎತ್ತು ಮೇಯಿಸಲು ಹೋಗಿದ್ದ ರೈತನೋರ್ವ ಮೃತಪಟ್ಟಿರುವ ಘಟನೆ ಹಿರೇಕೆರೂರ ತಾಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಡಮ್ಮಳ್ಳಿ ಗ್ರಾಮದ ನಾಗಪ್ಪ ಕಣಸೋಗಿ ಮೃತಪಟ್ಟಿರುವ ರೈತ ಎಂದು ಗುರುತಿಸಲಾಗಿದೆ. ಎತ್ತುಗಳನ್ನ ಮೇಯಿಸಲು ಹೋದಾಗ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ತಹಶೀಲ್ದಾರ್ ಪ್ರಭಾಕರ್, ಹಿರೇಕೆರೂರು ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಉದ್ಯಮಿ ಕಾರು ವಶಕ್ಕೆ ಪಡೆದ ಮಹಿಳೆ!

ಬೆಂಗಳೂರು: ತಮ್ಮ ಕಾರಿಗೆ ಹಾನಿಯಾಗಿದೆಯೆಂದು ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಕಾರಿನಲ್ಲಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳ ಸಮೇತ ಮಹಿಳೆ ಹಾಗೂ ಆಕೆಯ ಸಹಚರರು ಕಾರನ್ನು ತೆಗೆದುಕೊಂಡು ಹೋಗಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ವಿನಯ್ಗೌಡ ಎಂಬುವವರು ಸೆಂಟ್ ಮಾರ್ಕ್ ರಸ್ತೆಯ ಪಾಪಣ್ಣ ಸ್ಟ್ರೀಟ್ ನಲ್ಲಿ ವಾಸವಾಗಿದ್ದು, ಮೇ 3 ರಂದು ಬೆಳಗ್ಗೆ 4.15 ರಿಂದ 4.30 ರ ಮಧ್ಯ ಲ್ಯಾವೆಲ್ಲೆ ರಸ್ತೆಯಲ್ಲಿರುವ ಪೂರ್ವ ಗ್ರಾಂಡ್ ಅಪಾರ್ಟ್ಮೆಂಟ್ ಬೇಸ್ ಮ್ ಟ್ ಒಳಗಿನಿಂದ … Read more

ರಾಮ ಮಂದಿರದಲ್ಲಿ ಕಳ್ಳರು ಕರಾಮತ್ತು

ತಿಪಟೂರು: ನಗರದ ಹಳೆಪಾಳ್ಯದ ಗಾಯತ್ರಿ ನಗರದಲ್ಲಿರುವ ರಾಮ ಮಂದಿರದಲ್ಲಿ ಶುಕ್ರವಾರ ರಾತ್ರಿ ಕಳ್ಳರು ಕರಾಮತ್ತು ತೋರಿಸಿದ್ದಾರೆ. ದೇವಾಲಯ ಹಿಂದಿನ ಬಾಗಿಲ ಬೀಗ ಮುರಿದು ಹುಂಡಿ ಕದ್ದೊಯ್ದು ಗಾಯತ್ರಿ ನಗರ ಬಡಾವಣೆಗೆ ಹೊಂದಿಕೊಂಡಂತಿರುವ ಮಾವಿನ ತೋಪಿನಲ್ಲಿ ಹುಂಡಿಯ ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. ರಾಮ ಮಂದಿರ ಟ್ರಸ್ ಟ್ ನವರು ಪ್ರತಿ ವರ್ಷ ಮೇ ತಿಂಗಳಲ್ಲಿ ಹುಂಡಿ ತೆಗೆಯುತ್ತಿದ್ದರು, ಕಳೆದ ಬಾರಿ ಅಂದಾಜು 1 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು, ಅದರೊಳಗೆ ಕಳ್ಳತನವಾಗಿದೆ ಎಂದು ಸಾರ್ವಜನಿಕರು ದೂರಿದರು, … Read more

ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯ ಬರ್ಬರ ಹತ್ಯೆ

ಭದ್ರಾವತಿ: ವಾಕಿಂಗ್ ತೆರಳಿದ್ದ ವ್ಯಕ್ತಿಯೋರ್ವರನ್ನು ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಸ್ತೆಯಲ್ಲಿ ಮೇ 9 ರ ಮುಂಜಾನೆ ನಡೆದಿದೆ. ಹೊಸಕೊಪ್ಪದ ನಿವಾಸಿ ಹೇಮಣ್ಣ (70) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಅಡಕೆ ಖೇಣಿ ವ್ಯವಹಾರ ನಡೆಸುತ್ತಿದ್ದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಚಿರಪರಿಚಿತ ವ್ಯಕ್ತಿಯಾಗಿದ್ದರು ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಹೇಮಣ್ಣ ಅವರ ಮೇಲೆ ದಾಳಿಯಾಗಿತ್ತು. ಈ ವೇಳೆ ಅವರು ಕೂದಲೆಳೆ … Read more

ಸ್ವಾತಂತ್ರ್ಯದತ್ತ ಬಲೂಚಿಸ್ತಾನ?

ಇಸ್ಲಾಮಾಬಾದ್: ಬಲೂಚ್ ಸ್ವಾತಂತ್ರ್ಯ ಪರ ಗುಂಪುಗಳು ಪಾಕಿಸ್ತಾನಿ ಭದ್ರತಾ ಪಡೆಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ್ದು, ಬಲೂಚ್ ಜನರು ತಮ್ಮ ಧ್ವಜಗಳನ್ನು ಹಾರಿಸುತ್ತಿರುವ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಲೂಚ್ ಜನರು ತಮ್ಮದೇ ಆದ ಧ್ವಜಗಳನ್ನು ಹಾರಿಸಲು ಪಾಕಿಸ್ತಾನಿ ಧ್ವಜ ಕಿತ್ತೆಸೆದಿದ್ದಾರೆ. ಬಲೂಚಿಸ್ತಾನಕ್ಕೆ ಸ್ವಾಗತ ಎಂದು ಬಲೂಚ್ ಬರಹಗಾರ ಮೀರ್ ಯಾರ್ ಬಲೂಚ್ ಎಕ್ ಸ್ ನಲ್ಲಿ ಪೋಸ್ ಟ್ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ, ಪಾಕಿಸ್ತಾನದ ಫೆಡರಲ್ … Read more

ಪಾಕಿಸ್ತಾನ ಸೇನೆ ಮೇಲೆ ತಾಲಿಬಾನ್ ದಾಳಿ

ದೆಹಲಿ: ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ವೈಮಾನಿಕ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ಸೇನೆಯ ಪ್ರತಿದಾಳಿಗೆ ಪಾಕಿಸ್ತಾನ ಸೇನೆ ತತ್ತರಿಸಿದೆ. ಇದೇ ವೇಳೆ ಬಲೂಚಿಸ್ತಾನದ ಆರ್ಮಿ ಪಡೆಯೂ ಪಾಕಿಸ್ತಾನದ ಸೇನೆ ಮೇಲೆ ಮುಗಿಬಿದ್ದಿದೆ. 12 ಪಾಕಿಸ್ತಾನ ಸೈನಿಕರು ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು ಸೈನಿಕರ ದೇಹಗಳು ಛಿದ್ರವಾಗಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲಿಬಾನ್ ಸಹ ಪಾಕಿಸ್ತಾನ ಸೇನೆ ಮೇಲೆ ಮುಗಿಬಿದ್ದಿದೆ. ತೆಪ್ರೀಕ್-ಇ-ತಾಲಿಬಾನ್ ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ … Read more

ವಿದ್ಯುತ್ ತಂತಿ ಸ್ಪರ್ಶಿಸಿ ಮಗು ಸಾವು

ತುರುವೇಕೆರೆ: ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ವಿದ್ಯುತ್ತಂತಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ಮಗು ತಂತಿ ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ದೊಡ್ಡಗೊರಾ ಘಟ್ಟದಲ್ಲಿ ನಡೆದಿದೆ. ದೊಡ್ಡಗೊರಾ ಘಟ್ಟದ ವಾಸಿ ಚಂದನ್ಶೆಟ್ಟಿಯವರ ನಾಲ್ಕು ವರ್ಷದ ಪೋಷಿತ್ಶೆಟ್ಟಿ ಯೇ ಮೃತಪಟ್ಟ ದುರ್ದೈವಿ, ಪೋಷಿತ್ಶೆಟ್ಟಿ ತನ್ನ ಮನೆಯ ಮುಂಭಾಗ ಆಟವಾಡುವ ವೇಳೆ ಮನೆಗೆ ಹೊಂದಿಕೊಂಡಿರುವ ತೋಟಕ್ಕೆ ಹಾಕಲಾಗಿದ್ದ ವಿದ್ಯುತ್ ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ತುಂಡಾಗಿ ಬಿದ್ದಿತ್ತು ಎಂದು ಹೇಳಲಾಗಿದೆ, ಆ ವೇಳೆ ಮಗು ತಿಳಿಯದೇ … Read more

ಕೇಂದ್ರ ಕಾರಾಗೃಹದ ಕಾನ್ ಸ್ಟೇಬಲ್ ಅಮಾನತು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಂದನಾತ್ಮಕವಾಗಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇಲ್ಲಿನ ಕೇಂದ್ರ ಕಾರಾಗೃಹದ ಕಾನ್ ಸ್ಟೇಬಲ್ ಎಚ್.ಎನ್.ಮಧು ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಎಚ್.ಎನ್.ಮಧು ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ. ಮಧುಕುಮಾರ್ ಅವರು ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಹೆಚ್ಚುವರಿ ಎಸ್ಪಿ ಮೇಲೆ ಕೈ ಎತ್ತಿದ ಬಗ್ಗೆ ಏ.28ರಂದು ಎಚ್.ಎನ್.ಮಧು … Read more

ಲಂಚ ಪಡೆಯುವಾಗ ಪಿಎಸ್ ಐ, ಪಿಐ ಬಂಧನ

ಬೆಂಗಳೂರು: ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು 1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಠಾಣೆಯ ಪಿಎಸ್ ಐ ಮತ್ತು ಪಿಐ ಅನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಅವರ ಹೆಸರನ್ನು ಕೈಬಿಡಲು ಪಿಐ ಶಿವಾಜಿ ರಾವ್ ಮತ್ತು ಪಿಎಸ್ ಐ ಶಿವಾನಂದ ಜಿ. ಅವರು 6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೇಶವಮೂರ್ತಿ ಅವರು ಲೋಕಾಯಕ್ತ ಪೊಲೀಸರಿಗೆ ದೂರು … Read more

ಚಾಕೋಲೇಟ್, ಜೇಮ್ ಸ್ ನಲ್ಲೂ ಕೃತಕ ಬಣ್ಣ!

ಬೆಂಗಳೂರು: ಜಿಲೇಬಿ, ಶರಬತ್ ಬಳಿಕ ಇದೀಗ ಸಿಹಿತಿನಿಸುಗಳಾದ ಚಾಕೋಲೇಟ್, ಪೆಪ್ಪರ್ ಮೆಂಟ್, ಜೇಮ್ ಸ್ ಜೆಲ್ಲಿಗಳಲ್ಲಿ ಕೃತಕ ಬಣ್ಣ, ಕಲಬರಕೆ ನಡೆಯುತ್ತಿದೆ ಎಂದು ಆರೋಪಗಳ ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಗುಣಮಟ್ಟ ಇಲಾಖೆಯು ಪರೀಕ್ಷೆಗೆ ಮುಂದಾಗಿದೆ. ಚಾಕೊಲೇಟ್, ಪೆಪ್ಪರ್ ಮೆಂಟ್, ಜೇಮ್ ಸ್, ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕ ಕಲರ್ ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಇದೀಗ ಸ್ಯಾಂಪಲ್ ಸಂಗ್ರಹಿಸಿ ಟೆಸ್ ಟ್ ಗೆ ಸೂಚನೆ ನೀಡಿದೆ.ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ … Read more