
ಮೈಸೂರು: ನಗರದ ಯೋಗಿನಾರೇಯಣ ಯತೀಂದ್ರ ಪ್ರಚಾರ ಸಭಾ ನೀಡುವ 2026ನೇ ಸಾಲಿನ ‘ನಾರೇಯಣ ಪ್ರಶಸ್ತಿ’ಗೆ ಇಲ್ಲಿನ ಶ್ರೀರಾಮಕೃಷ್ಣ ಆಶ್ರಮವನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಅಭಿನಂದನಾ ಪ್ರಶಂಸಾಪತ್ರ, ಯೋಗಿನಾರೇಯಣ ಯತೀಂದ್ರರ ಸ್ಮರಣ ಫಲಕ ಹಾಗೂ 50 ಸಾವಿರ ನಗದು ಒಳಗೊಂಡಿದೆ. ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಶ್ರಮದ ಪರವಾಗಿ ಸ್ವಾಮಿ ಮುಕ್ತಿದಾನಂದ ಪ್ರಶಸ್ತಿ ಸ್ವೀಕರಿಸುವರು. ಆಶ್ರಮ ಆಧ್ಯಾತ್ಮಿಕ, ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಮಾಡುತ್ತಿರುವ ಅಪೂರ್ವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಭಾ ಪ್ರಧಾನ ಸಂಚಾಲಕ ಎಚ್.ಎ.ವೆಂಕಟೇಶ್ ತಿಳಿಸಿದ್ದಾರೆ.
ರಾಮಕೃಷ್ಣ ಆಶ್ರಮಕ್ಕೆ ನಾರೇಯಣ ಪ್ರಶಸ್ತಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು


