
ಬೆಂಗಳೂರು: ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ನಕಲಿ ಹಾಗೂ ತಿರುಚಿದ ಅಂಚೆ ಪತ್ರಗಳು ಕಾರಣ ಎಂದು ಶಾಸಕ ಡಿ.ಟಿ.ರಾಜೇಗೌಡ ಆರೋಪಿಸಿದರು.
ಶೃಂಗೇರಿ ಕ್ಷೇತ್ರದ ಅಂಚೆ ಮತ ಎಣಿಕೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಚುನಾಯಿತ ಪ್ರತಿನಿಧಿಯಾಗಿ ಅವರನ್ನು ಮರುನೇಮಕಗೊಳಿಸಿದ ನಂತರ ಮಾತನಾಡಿದ ಅವರು, ಈ ಹೋರಾಟದಲ್ಲಿ ಬಿಜೆಪಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ನಕಲಿ ದಾಖಲೆ, ಅಂಚೆ ಮತಪತ್ರಗಳನ್ನು ತಿರುಚಲಾಗಿತ್ತು ಎಂದು ದೂರಿದರು.
ನ್ಯಾಯಾಲಯವು ಅನೇಕ ಸುಳ್ಳುಗಳನ್ನು ಹಾಗೂ ನನ್ನ ವಿರೋಧಿಗಳು ಹೇರಿದ ಸುಮಾರು 18 ಆರೋಪಗಳನ್ನು ತಿರಸ್ಕರಿಸಿದೆ ಎಂದು ರಾಜೇಗೌಡ ತಿಳಿಸಿದರು.
ಬಿಜೆಪಿ ಗೆಲುವಿಗೆ ತಿರುಚಿದ ಅಂಚೆ ಪತ್ರ ಕಾರಣ: ರಾಜೇಗೌಡ








