
ತಿಪಟೂರು: ನಗರದ ಹಳೆಪಾಳ್ಯದ ಗಾಯತ್ರಿ ನಗರದಲ್ಲಿರುವ ರಾಮ ಮಂದಿರದಲ್ಲಿ ಶುಕ್ರವಾರ ರಾತ್ರಿ ಕಳ್ಳರು ಕರಾಮತ್ತು ತೋರಿಸಿದ್ದಾರೆ.
ದೇವಾಲಯ ಹಿಂದಿನ ಬಾಗಿಲ ಬೀಗ ಮುರಿದು ಹುಂಡಿ ಕದ್ದೊಯ್ದು ಗಾಯತ್ರಿ ನಗರ ಬಡಾವಣೆಗೆ ಹೊಂದಿಕೊಂಡಂತಿರುವ ಮಾವಿನ ತೋಪಿನಲ್ಲಿ ಹುಂಡಿಯ ಹಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ರಾಮ ಮಂದಿರ ಟ್ರಸ್ ಟ್ ನವರು ಪ್ರತಿ ವರ್ಷ ಮೇ ತಿಂಗಳಲ್ಲಿ ಹುಂಡಿ ತೆಗೆಯುತ್ತಿದ್ದರು, ಕಳೆದ ಬಾರಿ ಅಂದಾಜು 1 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು, ಅದರೊಳಗೆ ಕಳ್ಳತನವಾಗಿದೆ ಎಂದು ಸಾರ್ವಜನಿಕರು ದೂರಿದರು, ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Author
Post Views: 876







