ಮೈಸೂರು: ಮೈಸೂರು ದಸರಾ ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆಗೆ ಅಂಬಾರಿ ಹೊರುವ ತೂಕದ ತಾಲೀಮು ಆರಂಭವಾಗಿದೆ. ಮೊದಲ ದಿನ ಮಹೇಂದ್ರ ಆನೆಗೆ ಒಟ್ಟು 700 ಕೆಜಿ ತೂಕ ಹೊರಿಸಿ ಅಭ್ಯಾಸ ಮಾಡಿಸಲಾಯಿತು. ಇದರಲ್ಲಿ 350 ಕೆಜಿ ಮರಳಿನ ಮೂಟೆ ಹಾಗೂ 350 ಕೆಜಿ ನವ್ದಾ, ಗಾದಿ, ಚಾಪು ಮತ್ತು ಕಬ್ಬಿಣದ ತೊಟ್ಟಿಲಿನ ತೂಕ ಸೇರಿದೆ.
ಮಹೇಂದ್ರನಿಗೆ ಲಕ್ಷೀ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿದವು. ಅಂಬಾರಿ ಹೊರುವ ರೇಸ್ನಲ್ಲಿ ಮಹೇಂದ್ರ, ಪ್ರಶಾಂತ, ಏಕಲವ್ಯ ಹಾಗೂ ಧನಂಜಯ ಆನೆಗಳಿದ್ದು, ಹಂತ ಹಂತವಾಗಿ ಎಲ್ಲ ಆನೆಗಳಿಗೂ ಭಾರದ ತಾಲೀಮು ನೀಡಲಾಗುವುದು. ತರಬೇತಿ ಬಳಿಕ ಅಂಬಾರಿ ಹೊರುವ ಅಂತಿಮ ಆನೆಯನ್ನು ಆಯ್ಕೆ ಮಾಡಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಅಂಬಾರಿ ಹೊರುವ ತಾಲೀಮು ಆರಂಭ ಮಹೇಂದ್ರ ಆನೆಗೆ 700 ಕೆಜಿ ತೂಕದ ಅಭ್ಯಾಸ








